Saturday, November 11, 2017

Shanaischara charitam (ಶ್ರೀ ಶನೈಶ್ಚರ ಚರಿತಂ) I / 1 ರಿಂದ 20

ಶ್ರೀ ಶನೈಶ್ಚರ ಚರಿತಂ / ೧ ರಿಂದ ೨೦ 
 || श्री शनैश्चर देवताभ्यो नमः ||
ಶ್ರೀ ಶನೈಶ್ಚರ ಚರಿತಂ
( ಕನ್ನಡ ಭಾಮಿನಿ ಮತ್ತು ವಾರ್ಧಿಕ ತೆರ ತ್ರಿಪದಿಗಳಲ್ಲಿ  ಒಟ್ಟು ಐದು ಸಂಧಿಗಳು  )  
( ಶ್ರೀ ಶನೈಶ್ಚರ ಪ್ರತಿಮಾ ಪ್ರಾನಪ್ರತಿಷ್ಠಾಪನೆ, ಪದ್ಮ ಪುರಾಣ ಸ್ಥಿತ ಶ್ರೀ ಶನೈಶ್ಚರ ಕವಚ, ಶ್ರೀ ಶನೈಶ್ಚರೋರ್ನಾಮ ಅಷ್ಟೋತ್ತರ ಶತಂ ಜಪಃ ,ಶ್ರೀ ದಶರಥ ಪ್ರೋಕ್ತ ಶ್ರೀ ಶನೈಶ್ಚರಸ್ತೋತ್ರಮ್ ,
ಮಹರ್ಷಿ ವೇದವ್ಯಾಸ ವಿರಚಿತ  ಶ್ರೀ ಶನೈಶ್ಚರ ಚಕ್ರಂ  ಸಹಿತ )  


ಶ್ರೀ ಸೀತಾರಾಮಾಚಾರ್ಯ ಸುತ ತುಳಸಾತ್ಮಜ ಶ್ರೀಧರಾಚಾರ್ಯ ವಿರಚಿತ  
ಪ್ರಥಮ ಸಂಧಿ

ಶ್ರೀ ಗಣೇಶನ ನಮಿಸಿ ಬೇಡುವೆ | ನೀಗಿಸೆಂದುಸುರುವೆನು ಸೇವೆಗೆ | ಶ್ಲಾಘಿಸುವೆ ಶ್ರೀ ಶನೈಶ್ಚರ ಮಹ ಚರಿತೆ ವಿಸ್ತರಿಸಿ  || ೧ ||

ವಾಗು ದೇವಿಯೇ  ವಂದಿಸಿಯೇ ಭವ | ಭೋಗ ಭಾಗ್ಯವನೀವ ಪಿಂಗಳ- | ಮೋಘ ವರ್ಣನೆ ಮಾಳ್ಪ ಶಕ್ತಿಯು ಕೇಳ್ವೆ ಪ್ರೇರಣೆಯ || ೨ ||
ಶ್ರೀ ಗುರುವೆ ಹರಿ ಬ್ರಹ್ಮ ಶಂಕರ | ಆಗು ಹೋಗುಗಳೆಣೆಯ ಸಾಗಿಪ | ಸಾಗರವೇ ಪ್ರಾರ್ಥಿಸುವೆ ಕೋಣಸ್ಥರಿವ ದೆಸೆಯಿಂದ || ೩ ||
ಶ್ರೀ ಲಕುಮಿ ಗೋವಿಂದದೇವ ವಿ - | ಶಾಲ ಮರವಶ್ವತ್ಥ ರೂಪದ | ಓಲೈಸಿ ವಂದಿಸುವೆ ಕಾರ್ಯಕೆ ಯಶವನೀಯೆಂದು || ೪ ||
ಶರಣ ಸಂತತಿ ಚರಣ ಸನ್ನಿಧಿ | ಕರುಣಿಸೆಂ ಬಯಸುತಲೆ ನುತಿಸುವೆ | ವರವಿರಲಿ ಬುಧರೆಲ್ಲ ಪ್ರೇರಿಸಿ ಕೃತಿಗೆ ಕೈಗೂಡಲಿ || ೫ ||
ಮೂಲದೊಳು ಕಥೆ ಶಿವ ಭವಾನಿಗೆ | ಬಾಲ ಕುವರ  ಷಡಾನನಾಲಿಸಿ | ಮೇಲು ಸ್ಕಂದ ಪುರಾಣದೊಳು ತಾ ಕಾಶಿಖಂಡೆಂದು ||೬ ||
ಇದನಗಸ್ತಿಯು ಲೋಪಮುದ್ರೆಗೆ  |  ಬಾದರಾಯಣ ಶಿಷ್ಯರಲಿಯು |  ಮೋದದಲಿ ಶಿವಶರ್ಮ ವಿಷ್ಣುಗಣಗಳಿಮ್ ಕೇಳ್ದ || ೭ ||
ಕಾಶಿ ಖಂಡುಪಖಂಡ ವಿಂಶತಿ | ಶ್ರೀ ಶನೈಶ್ಚರಜನ್ಮ ಕಥೆಯದು | ಭಾಷೆ ಕನ್ನಡ ಪೇಳೆ ತಾ ಗೋವಿಂದ ಕೃಪೆಯಿಂದ  || ೮ ||    
ದಕ್ಷಿಣದಿ ದಾನವರ ಹಾವಳಿ | ಭಕ್ಷಿಸುತಲಿರೆ ಮಾನವರ ಕುಲ | ರುಕ್ಷ ಬುದ್ಧಿಯ ಕ್ರೂರಮತಿಗಳ ನಾಶ ಪಡಿಸಲ್ಕೆ  || ೯ ||
ದಾನವರ ನೀಗಿಸುವ ಕೃತಿಯದು | ತಾನೇ ಅಮರರಿಗೆಲ್ಲ ಆಗದೆ | ಮಾನ ಶರ ಶಪದಪಿಯು ಕುಂಭೋದ್ಭವಗೆ  ನೀಡಿದರು  || ೧೦ ||
ದೇವತೆಗಳಾದೇಶ ದಂತೆಯೇ | ನೋವು ಕಾಶಿಯ ವಿರಹ ತಾಳದೇ | ಧಾವಿಸಿದ ದಕ್ಷಿಣದ ಪಥವನೆ ತಿದ್ದಲಾಗಸ್ತಿ || ೧೧ ||
ಆತಾಪಿ ವಾತಾಪಿ ಇಲ್ವಲ  |  ಘಾತಮಾಡಲಗಸ್ತಿ ಪೋಗುವ | ಪ್ರೀತಿ ಪರಿವಾರವನು ದಕ್ಷಿಣ ಭೀಮೆ ತಟದಿರಿಸಿ || ೧೨ ||
ದಕ್ಷ ದಾರ್ಢ್ಯರ ಪರ್ಣ ಕುಟಿರವು | ವೃಕ್ಷ ದ್ವಯ ಅಶ್ವತ್ಥ ನಿಂಬಕ  | ಅಕ್ಷಯದ ಶಿಲೆ ಉತ್ತುಂಗಪೀದ ವೃಕ್ಷರಾಜಮರ  || ೧೩ ||  
ಸತ್ವಗುಣ ಗೋವಿಂದ ರಾಜನೇ | ನಿತ್ಯ ಪಾಲಿಪನೆಂದು ತರು  ಅ - |  ಶ್ವತ್ಥ ದಡಿಯೊಳು ಭಾವಮೂರ್ತಿಯ ಸ್ಮರಿಸಿಪೋಗಿಪನು  || ೧೪ ||
ಅಸುರ ವಧೆಯನು ಮುಗಿಸಿ ಕೂಡಿದ | ಅಸಮ ಮರ ಗೋವಿಂದರಾಜನ | ಬೇಸಸಿ ಪೊರಟನು ಕಾಶಿಖಂಡದ ಕಥೆಯ ಪೇಳುತಲೇ || ೧೫ ||
ಕೇಳು ಲೋಪಾಮುದ್ರೆ ಸತಿಯಳೆ | ಕೇಳುತಿಹ ಶಿವಶರ್ಮ ಗಣರಿಗೆ | ಕಾಳ ಕಂಕಣ ವಲಯವಾಗಿಹ ಲೋಕ ಯಾವುದಿದು  || ೧೬ ||
ಎಂದು ಕೇಳಲು ವಿಷ್ಣು ಗಣರಿಂ |  ತೆಂದು  ವದಿಸಿದ ಶ್ರೀ ಶನೈಶ್ಚರ | ಮಂದ ಗ್ರಹದ ಲೋಕ ಕಾಣುವುದೆಂದು ವರ್ಣಿಸುತ  || ೧೭ ||
ಕೃತ ಯುಗದ ಆರಭ್ಯ ಕಾಲದಿ | ಚತುರ ಮುಖಸುತ ಪ್ರಜಪತಿಯ ಅತಿ | ಚತುರತೆಯ ಗುಣದಿಂ ದಕ್ಷ ಬ್ರಹ್ಮನೆಂದು  ಹೆಸರಾದ  || ೧೮ ||            
ಕನ್ಯೆ ಸಂಜ್ಞಯ ದಕ್ಷ ಬ್ರಹ್ಮನು | ಭಾನು ನಾರಾಯಣಗೆ ಇತ್ತು ವಿ - | ಧಾನ ಪೂರ್ವಕ ಶುಭವಿವಾಹವು ಜರುಗಿಸಿರಲಾಗಿ || ೧೯ ||
ತರಣಿ ಸಂಜ್ಞಯರಲ್ಲಿ ಜನಿಸಿದ | ಹಿರಿಯ ಮಗು ಕೃತಾಂತ ಕಾಲನು | ದೊರೆಯು ಯಮಲೋಕದಲಿ ದಕ್ಷಿಣ ಪೂರ್ಣ ಅಧಿಕಾರಿ || ೨೦ ||

                                                                                                                                                                          ಕ್ರಮಶಃ


No comments:

Post a Comment